ಶ್ರೀ ಮಾರಿಕಾಂಬಾ ಯೂತ್ ಕ್ಲಬ್ (ರಿ) ಕಳವಾಡಿ ಬೈಂದೂರು ಸಂಸ್ಥೆಯ ವತಿಯಿಂದ ನೆರೆ ಸಂತ್ರಸ್ತರಿಗೆ ಅಗತ್ಯ ಇರುವ ವಸ್ತಗಳನ್ನು ಸಂಸ್ಥೆಯ ಸದಸ್ಯರೆಲ್ಲರ ದುಡಿಮೆಯ ಹಣದ ಸ್ವಲ್ಪ ಭಾಗದಿಂದ ಕ್ರೂಡಿಕರಣ ಮಾಡಿ ಉಡುಪಿ ಜಿಲ್ಲಾಡಳಿತ ಕಚೇರಿಯ ಗೊವರ್ಧನ್ ಅವರ ಮುಖಾಂತರ ಹಸ್ತಾಂತರಿಸಲಾಯಿತು.
ಈ ಒಂದು ಸಾಮಾಜಿಕ ಕಾರ್ಯದಲ್ಲಿ ಸಹಕರಿಸಿದ ಸಂಸ್ಥೆಯ ಸರ್ವ ಸದಸ್ಯರಿಗೂ ಅಭಿನಂದಿಸುತ್ತ ಕಾರ್ಯಕ್ರಮದಲ್ಲಿ ಹಾಜರಿದ್ದ ಸಂಸ್ಥೆಯ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ ಕಳವಾಡಿ, ಕಾರ್ಯದರ್ಶಿ ಗಣೇಶ್, ನಿಕಟಪೂರ್ವ ಅಧ್ಯಕ್ಷ ಪ್ರದೀಪ ಶೆಟ್ಟಿ ಕಾರಿಕಟ್ಟೆ, ಕೃಷ್ಣ ಚಂದನ ಕಳವಾಡಿ ರಾಘವೇಂದ್ರ ಆಚಾರ್ಯ ಕಳವಾಡಿ, ಸದಸ್ಯರಾದ ರಾಮಕೃಷ್ಣ ಕೊಠಾರಿ ಕಳವಾಡಿ, ಸಿಎಸ್ಸಿ ಸೆಂಟರ್ ಮಾಲಕರಾದ ಪ್ರವೀಣ್ ಕಂಚಿಕಾನ್ ಮತ್ತು ಅವಿನಾಶ್ ಪೂಜಾರಿ ಉಪಸ್ಥಿತರಿದ್ದರು.