ಕೊಲ್ಲೂರು: ಭಾರಿ ಮಳೆಯಿಂದಾಗಿ ಇಲ್ಲಿನ ಮಡೋಡಿ ಸೇತುವೆ ಕುಸಿದು ಸಂಪೂರ್ಣ ಜಲಾವೃತವಾಗಿದೆ.
ಕೊಲ್ಲೂರಿನಿಂದ ನಾಗೋಡಿ ಘಾಟಿಯಾಗಿ ನಗರದ ಮೂಲಕ ಬೆಂಗಳೂರನ್ನು ಸಂಪರ್ಕಿಸುವ ಮಡೋಡಿ ಸೇತುವೆ ಮಾರ್ಗ ಇದಾಗಿದ್ದು, ಸೇತುವೆ ಶುಕ್ರವಾರ ರಾತ್ರಿ ಕುಸಿದು ಸಂಪೂರ್ಣ ಜಲಾವೃತವಾಗಿದೆ.
ಇದರಿಂದಾಗಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಸದ್ಯಕ್ಕೆ ವಾಹನ ಸಂಚಾರ ಸ್ಥಗಿತಗೊಂಡಿದ್ದು, ಸಂಪಕಟ್ಟೆ- ಕಟ್ಟಿನಹೊಳೆ- ನಿಟ್ಟೂರು ಮಾರ್ಗವಾಗಿ ಸಂಚರಿಸಬಹುದಾಗಿದೆ.