ಬೈಂದೂರು : ಗುರುವಾರ ಬೆಳಿಗ್ಗಿನ ಜಾವ ನಾಗೂರಿನಲ್ಲಿ ಬೈಕ್ ಲಾರಿ ಹಿಂಬದಿಗೆ ಢಿಕ್ಕಿ ಹೊಡೆದ ಪರಿಣಾಮ ಪೊಲೀಸ್ ಸಿಬ್ಬಂದಿಯೋರ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬೈಂದೂರು ಪೊಲೀಸ್ ಠಾಣಾ ಸಿಬ್ಬಂದಿ ನಾಗೇಶ್ ಬಿಲ್ಲವ(37) ಮೃತನಾದ ದುರ್ದೈವಿ.
ಕರ್ತವ್ಯದಲ್ಲಿ ಇರುವಾಗ ಈ ಅಪಘಾತ ಸಂಭವಿಸಿದೆ. ಬೆಳಗ್ಗಿನ ಜಾವ 2 ಗಂಟೆಗೆ ಬೈಕ್ ನಿಯಂತ್ರಣ ತಪ್ಪಿ ನಿಂತಿದ್ದ ಲಾರಿಗೆ ಢಿಕ್ಕಿ ಹೊಡೆದು ಗಂಬೀರ ಗಾಯಗೊಂಡು ನಾಗೇಶ್ ಮೃತಪಟ್ಟಿದ್ದಾರೆ.
ಮೃತರು 6 ತಿಂಗಳ ಹಿಂದಯಷ್ಟೇ ವಿವಾಹಿತರಾಗಿದ್ದರು.
ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.